ಶಿವರಾಮ್ ಮಹೇಶ್ವರಿ ಮೂವೀಸ್ ಲಾಂಛನದಲ್ಲಿ ಶಿವರಾಮ್ ಸುಧಾಕರ್ ಮತ್ತು ಅಜಯ್ ಎಂ. ನಿರ್ಮಾಣದ ‘ಬಣ್ಣದ ನೆರಳು’ ಚಿತ್ರ ಸದ್ದುಗದ್ದಲವಿಲ್ಲದೇ ನಡೆದು ಈಗ ಬಿಡುಗಡೆಯ ಹಂತ ತಲುಪಿದೆ.
ಶಶಿಧರ್ ಬಿ. ನಿರ್ದೇಶನದ ‘ಬಣ್ಣದ ನೆರಳು’ ಚಿತ್ರಕ್ಕೆ ತಿರುಮಲ ಛಾಯಾಗ್ರಹಣ, ನರೇಶ್ ಸಂಗೀತ, ರಾಜೇಶ್ ಕಲೆ, ತಾಜ್ ಖಾನ್ ನೃತ್ಯ ನಿರ್ದೇಶನ, ಅನಿಲ್ ನಿರ್ವಹಣೆ ಈ ಚಿತ್ರಕ್ಕಿದೆ.
ಥ್ರಿಲ್ಲರ್ ಹಾರರ್ ಕಥಾವಸ್ತು ಉಳ್ಳ ಈ ಚಿತ್ರವು ಕೊಡಗಿನ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ನಾಲ್ಕು ಹಾಡುಗಳಿರುವ ಈ ಚಿತ್ರದಲ್ಲಿ ನಾಜ಼ರ್, ಟೆನ್ನಿಸ್ ಕೃಷ್ಣ, ಪ್ರಿಯಾ ದಾನಪ್ಪನವರ್, ಆನನ್ಯಾ ಶೆಟ್ಟಿ, ಶ್ರೀ ತೇಜ್, ಜೀವಾ, ರವಿ ಪ್ರಕಾಶ್, ವಿಘ್ನೇಶ್, ವಿ. ಬಾಲು ಮುಂತಾದವರಿದ್ದಾರೆ.